ಸೋಮವಾರಪೇಟೆ:ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಯುವಕರು
ಸೋಮವಾರಪೇಟೆ:ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ಯುವಕರು ಶಾಸಕ ಡಾ.ಮಂತರ್ ಗೌಡ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡವರನ್ನು ಶಾಸಕ ಡಾ.ಮಂತರ್ ಗೌಡ ರವರು ಕಾಂಗ್ರೆಸ್ ಪಕ್ಷದ ಶಲ್ಯ ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಭಾಗ್ಯ ರಾಜ್, ಮಹೇಶ್, ಆಕಾಶ್ ಪೂಜಾರಿ, ಅಜಿತ್ ಕುಮಾರ್, ಗೋವಿಂದ್ ರಾಜ್, ಏಳುಮಲೈ, ಪ್ರವೀಣ್. ಟಿ.ಸಿ, ಅಣ್ಣಪ್ಪ, ಮುತ್ತಪ್ಪ, ಗೌಸು (ಅಪ್ಪು), ಆಕಾಶ್. ಎಂ. ಆರ್ , ಪ್ರಶಾಂತ್, ಧನುಷ್ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಬಿ ಸತೀಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ ಅಬ್ಬೂರುಕಟ್ಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಲಾರೆನ್ಸ್, ತಣ್ಣೀರುಹಳ್ಳ ಕಾಂಗ್ರೆಸ್ ಬೂತ್ ಅಧ್ಯಕ್ಷ ಹರೀಶ್, ಮುಖಂಡರಾದ ಸತ್ತು ಡಿಸಿಲ್ವಾ, ರಫೀಕ್, ಆನಂದ್ ರಾಜ್, ದಿವಾಕರ್, ಕಿರಣ್, ಸುಜಿತ್, ವಿನಿ ಹಾಗೂ ಇತರರು ಉಪಸ್ಥಿತರಿದ್ದರು.