ಸೆಪ್ಟೆಂಬರ್ 07ರಂದು ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ ಸತ್ಯನಾರಾಯಣ ಪೂಜೆ ಇರುವುದಿಲ್ಲ!ಯಾಕೆ ಗೊತ್ತೇ!!

ಭಾಗಮಂಡಲ: ಸೆಪ್ಟೆಂಬರ್ 07 ರಂದು ಭಾನುವಾರ ಸಂಭವಿಸುವ ಭಾದ್ರಪದ ಶುಕ್ಲ ಪೌರ್ಣಮಿ ರಾಹುಗ್ರಸ್ತ ಚಂದ್ರಗ್ರಹಣ ಪ್ರಯುಕ್ತ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ ಸಂಜೆ 05:00 ರಿಂದ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಮತ್ತು ಹುಣ್ಣಿಮೆಯ ಸಾಮೂಹಿಕ ಸತ್ಯನಾರಾಯಣ ಪೂಜೆ ಇರುವುದಿಲ್ಲ. ಆದುದರಿಂದ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿಯಾದ ಚಂದ್ರಶೇಖರ್ ಎನ್.ಜಿ ಇವರು ಕೋರಿದ್ದಾರೆ.