ವಿರಾಜಪೇಟೆ: ಪತ್ರಕರ್ತೆ ರಜಿತ ಕಾರ್ಯಪ್ಪ ಅವರಿಗೆ ಸನ್ಮಾನ
ವಿರಾಜಪೇಟೆ:ವಿರಾಜಪೇಟೆಯ ಕವಿ, ಸಾಹಿತಿ, ಪತ್ರಕರ್ತೆ ರಜಿತ ಕಾರ್ಯಪ್ಪ ಅವರನ್ನು ಇತ್ತೀಚೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ವಿರಾಜಪೇಟೆಯ ಜೀವನ್ ಜ್ಯೋತಿ ಟ್ರಸ್ಟ್ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವತಿಯಿಂದ ನಡೆದ ಹಳೆ ನೋಟು ಮತ್ತು ನಾಣ್ಯಗಳ ಬೃಹತ್ ಪ್ರದರ್ಶನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೀವನ್ ಜ್ಯೋತಿ ಟ್ರಸ್ಟ್ ಅಧ್ಯಕ್ಷ ಅಜಯ್ ನಾರಾಯಣ್ ರಾವ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶಿವಕುಮಾರ್, ಶಿಕ್ಷಕರಾದ ದಿಲನ್, ಭವ್ಯ ಸೇರಿದಂತೆ ಇತರರು ಇದ್ದರು.