ಮಲ್ಲಳ್ಳಿ‌ ಫಾಲ್ಸ್ ಹಿಂಭಾಗದ ನೀರು ಸ್ಟೋರೇಜ್ ಗೆ ಹಾರಿ ಯುವಕ ಆತ್ಮಹತ್ಯೆ ಶಂಕೆ!

ಮಲ್ಲಳ್ಳಿ‌ ಫಾಲ್ಸ್ ಹಿಂಭಾಗದ ನೀರು ಸ್ಟೋರೇಜ್ ಗೆ ಹಾರಿ ಯುವಕ ಆತ್ಮಹತ್ಯೆ ಶಂಕೆ!

ಸೋಮವಾರಪೇಟೆ: ಯುವಕನೋರ್ವ ತಾನು ಕೆಲಸ ಮಾಡುತಿದ್ದ ಸ್ಥಳದಲ್ಲಿ ಕಾಣೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯ ಹಿನ್ನಲೆಯಲ್ಲಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ,ತನಿಖೆ ಕೈಗೊಂಡಿದ್ದಾರೆ. ಪಟ್ಟಣಕ್ಕೆ ಸಮೀಪದ ಹಣಕೋಡುಗ್ರಾಮದ ಚಿದಾನಂದ (27)ಎಂಬ ಯುವಕ ಪುಷ್ಪಗಿರಿ ಸಮೀಪದ ಬೀದಳ್ಳಿ ಹೈಡಲ್ ಪವರ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದು ಭಾನುವಾರ ರಾತ್ರಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

 ನನಗೆ ಜೀವನದಲ್ಲಿ ಜಿಗುಪ್ಸೆ ಉಂಟಾಗಿದ್ದು ಆತ್ಮ ಹತ್ಯೆ ಮಾಡಿಕೊಳ್ಳುತೇನೆ ಎಂದು ಸ್ನೇಹಿತರಿಗೆ ಮೆಸೇಜ್ ಮಾಡಿದ್ದು.ಸ್ಥಳದಲ್ಲಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಆತ ನೀರಿನ ಕಡೆಗೆ ಹೋಗುತ್ತಿರುವ ದೃಶ್ಯ ಕಂಡುಬಂದಿದೆ ಎಂದು ವೃತ್ತ ನಿರೀಕ್ಷಕ ಮುದ್ದುಮಾದೇವ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು,ಅಗ್ನಿಶಾಮಕ ದಳದ ಸಿಬ್ಬಂದಿಗಳು,ಮುಳುಗು ತಜ್ಞರು ತೆರಳಿದ್ದು ಮಳೆ ಹೆಚ್ಚಾಗಿ ಬೀಳುತ್ತಿರುವುದರಿಂದ ನೀರಿನ ಹರಿವು ಹೆಚ್ಚಾಗಿದ್ದು ಮೃತದೇಹದ ಹುಡುಕಾಟಕ್ಕೆ ತೊಡಕಾಗಿದೆ ಎನ್ನಲಾಗಿದ್ದು,ನೀರಿನ ಹರಿವು ಹೆಚ್ಚಾಗಿ ವಿದ್ಯುತ್ ಉತ್ಪಾದನಾ ಘಟಕದ ಗೆಟ್ ತೆರೆದಿದ್ದರೆ ಮಲ್ಲಳ್ಳಿ ಜಲಪಾತ ದ ಮೂಲಕ ಮೃತದೇಹ ಹೊರಹೋಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.