ಕಂಡಕರೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಚೆಟ್ಟಳ್ಳಿ:ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಬಕ್ರೀದ್ ಹಬ್ಬವನ್ನು ಕಂಡಕರೆಯಲ್ಲಿ ಮುಸ್ಲಿಮ್ ಸಮುದಾಯದವರು ಸಂಭ್ರಮದಿಂದ ಆಚರಣೆ ಮಾಡಿದರು.ಈದ್ ನಮಾಝ್ ಗೆ ಮಹಲ್ ಖತೀಬರಾದ ಅಬ್ದುಲ್ ಸಲಾಂ ಸಖಾಫಿ ನೇತೃತ್ವ ವಹಿಸಿದರು.ಈದ್ ನಮಾಜ್ ಬಳಿಕ ಮರಣವೊಂದಿದವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭ ಮಹಲ್ ಕಮಿಟಿ ಅಧ್ಯಕ್ಷರಾದ ಆಲಿ ಮುಸ್ಲಿಯಾರ್ ಹಾಜಿ,ಪ್ರಧಾನ ಕಾರ್ಯದರ್ಶಿ ಸರ್ಫುದ್ದೀನ್,ಉಪಾಧ್ಯಕ್ಷ ಕೆ.ಎ ಹುಸೈನ್,ಸಹ ಕಾರ್ಯದರ್ಶಿ ಅಬ್ದುಲ್ ಗಫೂರ್ ಇದ್ದರು.
What's Your Reaction?






