ಕೊಂಡಂಗೇರಿ ಉರೂಸ್ ಇಂದು ಸಾರ್ವಜನಿಕ ಸೌಹಾರ್ದ ಸಮ್ಮೇಳನ.

Apr 21, 2025 - 11:47
Apr 21, 2025 - 11:50
 0  2
ಕೊಂಡಂಗೇರಿ ಉರೂಸ್  ಇಂದು ಸಾರ್ವಜನಿಕ ಸೌಹಾರ್ದ ಸಮ್ಮೇಳನ.

ಮಡಿಕೇರಿ: ಕೊಂಡಂಗೇರಿ ಉರೂಸ್ ಅಂಗವಾಗಿ ಏಪ್ರಿಲ್ 21 ರಂದು (ಇಂದು) 1 ಗಂಟೆಗೆ ಸಾರ್ವಜನಿಕ ಸೌಹಾರ್ದ ಸಮ್ಮೇಳನವು ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ ಯುಸೂಪ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ಹಜರತ್‌‌ ದುಆ ನೇತೃತ್ವ ವಹಿಸಲಿದ್ದಾರೆ‌.ಮುಖ್ಯ ಅಥಿತಿಗಳಾಗಿ ಎಸ್.ವೈ.ಎಸ್ ಕೇರಳ ರಾಜ್ಯ ಅಧ್ಯಕ್ಷ ಡಾ. ಅಬ್ದುಲ್ ಹಕೀಂ ಅಝ್ಹರಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ,ದಾರ್ಮಿಕ ಪಂಡಿತ ಸಯ್ಯದ್ ಎಸ್ ಹಕೀಂ ಅಸ್ಸಖಾಫ್‌ ತಂಙಳ್ ಆದೂರು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಕೂರ್ಗ್ ಜಂಇಯ್ಯತುಲ್‌ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎನ್ ಕೆ ಎಂ ಶಾಫಿ ಸಹದಿ, ಪ್ರಮುಖರಾದ ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ತಂಙಳ್‌ ಕಿಲ್ಲೂರು,ಹಾಲುಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ ಎ ದಿನೇಶ್,ಸದಸ್ಯರುಗಳಾದ ಹೆಚ್ ಹೆಚ್ ಹನೀಫ್,. ಕೆ ಹೆಚ್ ಅಬ್ದುಲ್ ರಹ್ಮಾನ್, ಕೆ ಜಿ ಲೋಕೇಶ್, ಪ್ರಮುಖರಾದ ಹುಸೈನ್‌ ಸಖಾಫಿ,  ಪುಡಿಯಂಡ ಇ ಶಾದುಲಿ, ಡಾ ಜೋಯಿಪುರಾ ಎ ಕುಂಞ ಅಬ್ದುಲ್ಲ ಹಾಜಿ,ಎಂ ಐ ಮುಹಮ್ಮದ್ ಸಾಲಿ ಹಾಜಿ ಪೇರಿಯಂಡ ಹೆಚ್ ಇಸ್ಮಾಯಿಲ್ ಸಖಾಫಿ, ಮಹಮ್ಮದ್ ಇರ್ಪಾನ್ ಸೇರಿದಂತೆ ಮತ್ತಿತರರು ಉಪಸ್ಥಿತಲಿದ್ದಾರೆ.ಸಂಜೆ ಅನ್ನದಾನ ನಡೆಯಲಿದೆ .

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0