ಕೊಡಗು ಜಿಲ್ಲಾ ಮಟ್ಟದ ತೋಳು ಬಲ ಕುಸ್ತಿ ( ಆರ್ಮ್ ರೆಸ್ಲಿಂಗ್) ಚಾಂಪಿಯನ್‌ಶಿಪ್: ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಹೊಸ ಹೆಜ್ಜೆ

Apr 27, 2025 - 01:58
 0  7
ಕೊಡಗು ಜಿಲ್ಲಾ ಮಟ್ಟದ ತೋಳು ಬಲ ಕುಸ್ತಿ ( ಆರ್ಮ್ ರೆಸ್ಲಿಂಗ್) ಚಾಂಪಿಯನ್‌ಶಿಪ್: ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಹೊಸ ಹೆಜ್ಜೆ

ವಿರಾಜಪೇಟೆ: 8 ನೇ ಶತಮಾನದಲ್ಲಿ ಬೆಳಕಿಗೆ ಬಂದಿರುವ ಕ್ರೀಡೆ ತೋಳು ಬಲ ಕುಸ್ತಿ ಕ್ರೀಡೆ, ನಂತರದಲ್ಲಿ 1978 ರಲ್ಲಿ ಒಲಂಪಿಕ್ ಕ್ರೀಡಾಕೂಟದಲ್ಲಿ ಸೇರ್ಪಡೆಗೊಂಡಿತ್ತು. ವ್ಯಕ್ತಿಗಳು ತಮ್ಮ ದೈಹಿಕ ಸಾಮರ್ಥೈವನ್ನು ತೋಳು ಬಲದಲ್ಲಿ ತೋರಿಸಿರುವ ವಿನೂತನ ಕ್ರೀಡೆಯನ್ನು ಜಿಲ್ಲೆಯಲ್ಲಿ ಪ್ರೋತ್ಸಾಹಿಸಲು ಎಕ್.ಭಾರತ್ ಅಭಿಯಾನ್ ಸಂಸ್ಥೆಯು ಮೇ ತಿಂಗಳಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದೆ.

ಎಕ್ ಭಾರತ್ ಅಭಿಯಾನ್ ಸಂಸ್ಥೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಗೋಣಿಕೊಪ್ಪಲು ಪಟ್ಟಣದ ಕಛೇರಿಯಲ್ಲಿ ತೋಳು ಬಲ ಕುಸ್ತಿ ಕ್ರೀಡೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಂತರ ಮಾತನಾಡಿದ ಎಕ್.ಭಾರತ್ ಅಭಿಯಾನ್ ಸಂಸ್ಥೆಯ ಸಂಸ್ಥಾಪಕರಾದ ಡಾ.ಜೋಯಪ್ಪ ಕ್.ಭಾರತ್ ಅಭಿಯಾನ ಎಂಬುದು ಒಂದು ಆಂದೋಲನದಂತೆ ದೇಶಾದ್ಯಂತ ,ರಾಷ್ಟೃ ಗೀತೆಯ ಸಾರ, ಮೌಲ್ಯ ಮತ್ತು ಪದಗಳ ಅರ್ಥವನ್ನು ಜನಸಮಾನ್ಯರಿಗೆ ಜಾಗೃತಿ ಮೂಡಿಸುವುದಾಗಿದೆ. ರಾಷ್ಟ್ರದ ಮೇಲಿರುವ ಅಭಿಮಾನ, ರಾಷ್ಠೃ ಗೌರವ, ಲಾಂಛನಗಳು, ಹೀಗೆ ಹಲವಾರು ವಿಷಯಗಳಿದ್ದರು ಅನೇಕರಿಗೆ ಇದರ ಮೌಲ್ಯಗಳು ತಿಳಿದಿರುವುದಿಲ್ಲ‌. ಮುಂದಿನ ಪೀಳಿಗೆಯು ಸಹ ಇದರ ಅರ್ಥವನ್ನು ಮನದಟ್ಟು ಮಾಡಬೇಕು ಎಂಬ ಪರಿಕಲ್ಪನೆಯೊಂದಿಗೆ ಎಕ್ ಭಾರತ್ ಅಭಿಯಾನ್ ಹುಟ್ಟುಹಾಕಲಾಗಿದೆ. ಜಿಲ್ಲೆಯಲ್ಲಿ ಅನೇಕ ಕ್ರೀಡೆಗಳನ್ನು ಗೌರವಿಸಿ ಪ್ರೋತ್ಸಾಹಿಸಿ ಇದೀಗ ಚಾಲ್ತಿಯಲ್ಲಿದೆ. ದೈಹಿಕ ಸದೃಢತೆಯ ಪ್ರದರ್ಶನ ವ್ಯಕ್ತಿಗಳಿಂದ ದೊರಕಬೇಕು ಎನ್ನುವ ಕಲ್ಪನೆಯೊಂದಿಗೆ ಮತ್ತು ಆರ್ಮ್ ರೆಸ್ಲಿಂಗ್ ಕ್ರೀಡೆಯನ್ನು ವಿಖ್ಯಾತಗೊಳಿಸುವ ನಿಟ್ಟಿನಲ್ಲಿ ತೋಳು ಬಲ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್ ಕ್ರೀಡೆಯನ್ನು ಹಮ್ಮಿಕೊಳ್ಳಲಾಗಿದೆ. ಜನತೆಯ ಪ್ರೋತ್ಸಾಹ ಕ್ರೀಡೆಗೆ ಲಭಿಸುವಂತಾಗಬೇಕು. ಇದರೊಂದಿಗೆ ಖ್ಯಾತಿಪಡೆಯಬೇಕು. ಜಿಲ್ಲೆಯ ಜನತೆಯು ಸಹಕರಿಸುವಂತೆ ಮನವಿ ಮಾಡಿದರು.

ಎಕ್ ಭಾರತ್ ಅಭಿಯಾನ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಎಸ್. ರಾಜೇಶ್ ಮಾತನಾಡಿ,ಇತ್ತಿಚಿನ ದಿನಗಳಲ್ಲಿ ಯುವ ಸಮೂಹವು ಮಾದಕ ವಸ್ತುಗಳ ಉಪಯೋಗ ಹಾಗೂ ಮೊಬೈಲ್ ಗೆ ದಾಸರಾಗಿ ದೈಹಿಕವಾಗಿ ಕುಗ್ಗಿಹೋಗಿದ್ದಾರೆ. ಕ್ರೀಡೆಗಳಲ್ಲಿ ಭಾಗಿಗಳಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಯುವಕರು ಕ್ರೀಡೆಯತ್ತ ಒಲುವು ತೋರುವಂತಾಗಬೇಕು. ಜಿಲ್ಲೆಯಲ್ಲಿ ಹಾಕಿ, ಕ್ರಿಕೆಟ್, ಪುಟ್ಬಾಲ್, ವಾಲಿಬಾಲ್, ಬಾಸ್ಕೆಟ್ ಬಾಲ್, ಟಗ್ ಅಫ್ ವಾರ್ ಹೀಗೆ ಹಲವಾರು ಕ್ರೀಡೆಗಳಿಗೆ ಗೌರವ, ಸಹಕಾರ ಪ್ರೋತ್ಸಾಹ ಲಭಿಸಿದೆ ಮತ್ತು ಪ್ರಚಲಿತದಲ್ಲಿದೆ. ಕೆಲವು ಕ್ರೀಡೆಗಳು ಅಲ್ಪ ಸಮಯದಲ್ಲಿ ಖ್ಯಾತಿಗೊಂಡು ಚಾಲನೆ ಪ್ರೋತ್ಸಾಹ ದೊರಕದೆ ಕಣ್ಮರೆಯಾಗಿ ಹೋಗುತ್ತಿದೆ. ನಶಿಸಿ ಹೋಗುವ ಕ್ರೀಡೆಗಳಿಗೆ ಮರುಜೀವ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಆರ್ಮ್ ರಸ್ಲಿಂಗ್ ಕ್ರೀಡೆಯನ್ನು ಕರ್ನಾಟಕ ಆರ್ಮ್ಸ್ ಸ್ಫೋಟ್ಸ್ ಅಸೋಶಿಯೇಷನ್ ಸಹಯೋಗದೊಂದಿಗೆ ಗೊಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ಅಯೋಜಿಸಲಾಗಿದೆ. ಮೇ ತಿಂಗಳ 11 ರಂದು ಭಾನುವಾರ ದಿನದಂದು ನಡೆಯಲಿದೆ. ಪ್ರಸ್ತುತ ಕ್ರೀಡೆಯಲ್ಲಿ ಪುರುಷರ ವಿಭಾಗ, ಮಹಿಳಾ ವಿಭಾಗ, 18 ವರ್ಷ ಪ್ರಾಯ ಒಳಗಿರುವ ಮಕ್ಕಳ ವಿಭಾಗ, ಮತ್ತು ವಿಶೇಷ ಚೇತನರ ವಿಭಾಗ ಎಂದು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೇ ನಡೆಯಲಿದೆ. ಬೆಳಿಗ್ಗೆ 09 ರಿಂದ ಸಂಜೆ 06 ವರೆಗೆ ಕ್ರೀಡೆ ನಡೆಯಲಿದೆ. ಕ್ರೀಡೆಯು ಜಿಲ್ಲಾ ಮಟ್ಟದ ಸ್ಪರ್ಧೆಯಾಗಿದ್ದು ಭಾಗವಹಿಸುವವರು ಆನ್ ಲೈನ್ ಮೂಲಕ ಅಥಾವ ಸ್ಥಳದಲ್ಲೇ ನೊಂದಾಣಿ ಮಾಡಿಕೊಳ್ಳಬಹುದು. ನೊಂದಾಣಿಗಾಗಿ ರೂ 250 ಗಳನ್ನು ನಿಗದಿಗೊಳಿಸಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೋಬ್ಬರಿಗೂ ಪದಕ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಆರ್ಮ್ಸ್ ರಸ್ಲಿಂಗ್ ಕ್ರೀಡೆಗೆ ಪ್ರೋತ್ಸಾಹ ನೀಡಿ ಸರ್ವರೂ ಭಾಗವಹಿಸಿ ಎಂದು ಮನವಿ ಮಾಡಿದರು.ಹೆಚ್ಚಿನ ಮಾಹಿತಿಗಾಗಿ 9980259781,9902611539 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಈ ಸಂದರ್ಭ, ಫಿಟ್ನೆಸ್ಸ್ ಮಂತ್ರ ಜಿಮ್ ಮಾಲೀಕರಾದ ಪಿ.ಹೆಚ್. ರಫೀಕ್ ಮತ್ತು ಬುಲ್ಸ್ ಕಿಂಗ್‌ಡ ಜಿಮ್ ನ ಮಾಲೀಕರಾದ ಬಿಬಿನ್ ಎ.ಬಿ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0