ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಆಲೀರ ಕ್ರಿಕೆಟ್ ಕಪ್: ಆಟಗಾರರಿಗೆ ಶುಭಕೋರಿದ ಎ.ಎಸ್ ಪೊನ್ನಣ್ಣ

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ಮಾಪಿಳ್ಳೆತೋಡುವಿನಲ್ಲಿ ನಡೆಯುತ್ತಿರುವ ಕೊಡವ ಮುಸ್ಲಿಂ ಕುಟುಂಬಗಳ ನಡುವೆನ ಆಲೀರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ, ಆಯೋಜಕರ ಆಹ್ವಾನದ ಮೇರೆಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಅತಿಥಿಯಾಗಿ ಭಾಗವಹಿಸಿದ್ದರು.
ಈ ಹಿಂದೆ ಇದೇ ಪಂದ್ಯಾಟದ ಲಾಂಛನವನ್ನು ಮಾನ್ಯ ಶಾಸಕರು ಹಾಗೂ ಇತರ ಪ್ರಮುಖರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದರು.ನಾಡಿನ ಯುವಕರಿಗೆ ಸದಾ ಕ್ರೀಡೆಯಲ್ಲಿ ಮುಂದೆ ಬರುವಂತೆ ಪ್ರೋತ್ಸಾಹಿಸುತ್ತಿರುವ ಮಾನ್ಯ ಶಾಸಕರು, ಪಂದ್ಯಾಟದ ಮಧ್ಯೆ ಆಟಗಾರರ ಕೋರಿಕೆಯಂತೆ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.
ಕ್ರಿಕೆಟ್ ಆಯೋಜಕರನ್ನು ಅಭಿನಂದಿಸುತ್ತಾ, ಎಲ್ಲಾ ತಂಡಗಳಿಗೆ ಶುಭ ಕೋರಿದ ಮಾನ್ಯ ಶಾಸಕರು, ಕ್ರಿಕೆಟ್ ರಸದೌತಣವನ್ನು ಪ್ರೇಕ್ಷಕರಿಗೆ ನೀಡುವುದರೊಂದಿಗೆ, ಆಟಗಾರರು ತಮ್ಮ ಆಟದ ಪ್ರತಿಭೆಯನ್ನು ನಾಡಿಗೆ ಪರಿಚಯಿಸುವಂಥಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಕಾರ್ಯಕ್ರಮ ಆಯೋಜಕರು ಈ ಭಾಗದ ಪ್ರಮುಖರು ಹಾಗೂ ಕ್ರೀಡಾಪ್ರೇಮಿಗಳು ಉಪಸ್ಥಿತರಿದ್ದರು.
What's Your Reaction?






