ಪ್ರವಾದಿ ಇಬ್ರಾಹಿಂ - ಇಸ್ಮಾಯಿಲ್ ಅವರ ತ್ಯಾಗ ಸಮರ್ಪರ್ಣೆಯನ್ನು ಅನುಕರಿಸಬೇಕಿದೆ - ಇಬ್ರಾಹಿಂ ಮದನಿ : ಅಮ್ಮತ್ತಿಯಲ್ಲಿ ಬಕ್ರೀದ್ ಆಚರಣೆ

ಆಮ್ಮತಿ: ಪ್ರವಾದಿ ಇಬ್ರಾಹಿಂ - ಇಸ್ಮಾಯಿಲ್ ಅವರ ತ್ಯಾಗ ಸಮರ್ಪರ್ಣೆಯನ್ನು ಅನುಕರಿಸಬೇಕಿದೆ ಎಂದು ಅಮ್ಮತಿ ಶಾಫಿ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ಮದನಿ ಅಭಿಪ್ರಾಯಪಟ್ಟರು.ಈದುಲ್ ಅದಾ ವಿಶೇಷ ಪ್ರಾರ್ಥನೆಗೆ ನೇತೃತ್ವ ವಹಿಸಿ ಮಾತನಾಡಿದ ಅವರು ಪ್ರಸ್ತುತ ಎಲ್ಲರೂ ಅಸೂಯೆ - ಅಹಂಕಾರದಂತಹ ಮನೋ ವ್ಯಾದಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಹಲವು ಸಂಬಂಧಗಳು ಮುರಿದು ಹೋಗುತ್ತಿದ್ದು, ಪ್ರವಾದಿ ಇಬ್ರಾಹಿಂ - ಇಸ್ಮಾಯಿಲ್ ಅವರ ತ್ಯಾಗ ಸಮರ್ಪರ್ಣೆಯನ್ನು ಅನುಕರಿಸಬೇಕಿದೆ ಎಂದರು. ಈದುಲ್ ಅದಾ ವಿಶೇಷ ಪ್ರಾರ್ಥನೆ ಮಸೀದಿ ಹಾಗು ಸ್ಮಶಾನದಲ್ಲಿ ನೆರವೇರಿಸಲಾಯಿತು.
What's Your Reaction?






