ಹಂಸ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ಗಾಳಬೀಡು ವಲಯ ಕಾಂಗ್ರೆಸ್ ಸಭೆ

ಮಡಿಕೇರಿ: ಗಾಳಿಬೀಡು ವಲಯ ಕಾಂಗ್ರೆಸ್ ಸಭೆಯು ಚಪ್ಪಂಡಕೆರೆಯ ಅಡ್ಕದ ಬಾಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಂಸ ಹೆಚ್.ಎ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯಲ್ಲಿ ಸಮಿತಿ ರಚನೆಯ ಉಸ್ತುವಾರಿಗಳಾಗಿ ನೇಮಿಸಲ್ಪಟ್ಟ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಜು ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುನೀರ್ ಅಹ್ಮದ್, ಮೂಡ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಗ್ಯಾರೆಂಟಿ ಅನುಷ್ಠಾನ ಪ್ರಾಧೀಕಾರದ ತಾಲೂಕು ಅಧ್ಯಕ್ಷರಾದ ಮಂದ್ರಿರ ಮೋಹನ್ ದಾಸ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿ.ಪಿ ಸುರೇಶ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಜು ತಿಮ್ಮಯ್ಯರವರು ಮಾತನಾಡಿ " ಕೆಪಿಸಿಸಿಯ ಆದೇಶದ ಮೇರೆಗೆ ಪಕ್ಷದ ಬಲವರ್ಧನೆಗೆ ವಲಯ ಮಟ್ಟದಲ್ಲಿ ಸಂಘಟನೆಗೆ ಪ್ರಾಮುಖ್ಯತೆ ನೀಡಿದೆ" ಎಂದರು. ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಮುನೀರ್ ಅಹ್ಮದ್ " ವಲಯ ಕಾಂಗ್ರೆಸ್ ಸಮಿತಿ ತನ್ನ ವ್ಯಾಪ್ತಿಯಲ್ಲಿ ಈ ಕೂಡಲೆ ಕಾರ್ಯಗತಗೊಳ್ಳಬೇಕು " ಎಂದರು. ಗ್ಯಾರೆಂಟಿ ಅನುಷ್ಠಾನ ಪ್ರಾಧೀಕಾರದ ತಾಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್ ಮಾತನಾಡಿ " ವಲಯ ಮಟ್ಟದ ಅಭಿವೃದ್ದಿ ಕಾರ್ಯಗಳು ವಲಯ ಸಮಿತಿ ಮುಖಾಂತರ ಪಾರದರ್ಶಕವಾಗಿ ನಡೆಯಲಿದೆ" ಎಂದರು.
ನೂತನವಾಗಿ ವಲಯ ಕಾಂಗ್ರೆಸ್ ಪಧಾದಿಕಾರಿಗಳನ್ನು ನೇಮಿಸಲಾಯಿತು. ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸುಭಾಶ್ಚಂದ್ರ ಆಳ್ವ, ಉಪಾಧ್ಯಕ್ಷರಾಗಿ ಸಿದ್ದಂಡ ಪವನ್ ಬಿದ್ದಪ್ಪ, ಹಾಗು ಸವಿತಾ ರೈ, ಪ್ರ.ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಕೋಚನ, ಸಹಕಾರ್ಯದರ್ಶಿಯಾಗಿ ಹರಿ ಚಂಗಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪಾ ಪೂಣಚ್ಚಾ, ಸಮೀತಿಯ ಸದಸ್ಯರುಗಳಾಗಿ ಕೆ.ಕೆ ತಮ್ಮಿ, ಕಾರೇರಾ ದಿನೇಶ್, ಮಿನ್ನಂಡ ನೇತ್ರು, ದಿವಾಕರ್, N.ಕೆ.ಜಯಲಕ್ಷ್ಮಿ, ಕೆ.ಕೆ ಸುಜಯ , ಲೀಲಾವತಿ, ಆನಂದ, ಬಶೀರ್, ಶ್ರೀಮತಿ ಚಿತ್ರಾ ಅವರನ್ನು ನೇಮಿಸಲಾಯಿತು. ಸಲಹಾ ಸಮಿತಿಯ ಸದಸ್ಯರುಗಳನ್ನಾಗಿ ಕೋಲುಮುಡಿಯನ ಅನಂತಕುಮಾರ್, ಶ್ರೀಮತಿ ಜಯಂತಿ ಶೆಟ್ಟಿ, ಕೊಂಬಾರನ ಗಣಪತಿ, ಅಯಿಲಪಂಡ ಪೊನ್ನಪ್ಪರವರನ್ನು ನೇಮಿಸಲಾಯಿತು.
ಈ ಸಂಧರ್ಭ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾದ ಪುಷ್ಪಾ ಪೂಣಚ್ಚ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೋಹನ್ ವಿ.ಜಿ, ಕಾರ್ಯದರ್ಶಿ ಮನು ಮುದ್ದಪ್ಪ, ಅಕ್ರಮ ಸಕ್ರಮ ಸಮಿತಿ ತಾಲೂಕು ಸದಸ್ಯರಾದ ಹರಿಪ್ರಸಾದ್ ಕೋಚನ, ಮುಖಂಡರುಗಳಾದ ಶ್ರೀಮತಿ ಜಯಂತಿ ಶೆಟ್ಟಿ, ಕೋಲುಮುಡಿಯನ ಅನಂತಕುಮಾರ್, ಕೊಂಬಾರನ ಗಣಪತಿ, ಭೂತ್ ಸಮಿತಿ ಅಧ್ಯಕ್ಷರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
What's Your Reaction?






