ನಾಪೋಕ್ಲು: ಕಾವೇರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ -ಅಯ್ಯಪ್ಪ ಮೃತದೇಹ ಪತ್ತೆ

May 13, 2025 - 13:34
May 13, 2025 - 16:19
 0  105
ನಾಪೋಕ್ಲು: ಕಾವೇರಿ ನೀರಿನಲ್ಲಿ  ಮುಳುಗಿ ಸಾವನ್ನಪ್ಪಿದ ಪ್ರಕರಣ -ಅಯ್ಯಪ್ಪ ಮೃತದೇಹ ಪತ್ತೆ

ನಾಪೋಕ್ಲು :ಪೊಲೀಸ್ ಠಾಣಾ ವ್ಯಾಪ್ತಿಯ ಕೂರುಳಿ ಕಡಿಯತ್ತೂರು ಬಳಿಯ ದೋಣಿ ಕಡವು ಎಂಬಲ್ಲಿ ನಿನ್ನೆ ನಡೆದ ದುರ್ಘಟನೆಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕರ ತಂಡ ದೋಣಿಯಲ್ಲಿ ಸಾಗುವ ಸಂದರ್ಭ ದೋಣಿ ಮಗುಚಿದ ಪರಿಣಾಮ ಈಜು ಬಾರದೆ ಇಬ್ಬರು ಯುವಕರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಸೋಮವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಗಿರೀಶ್ (16) ಎಂಬ ಯುವಕನ ಮೃತ ದೇಹವನ್ನು ನದಿ ನೀರಿನಿಂದ ಹೊರ ತೆಗೆಯಲಾಗಿತ್ತು.ಮತ್ತೊಬ್ಬ ಯುವಕ ಅಯ್ಯಪ್ಪ(18 )ಎಂಬವನ ಮೃತದೆಹಕ್ಕಾಗಿ ನಡೆದ ಶೋಧಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಉಂಟಾದ ಹಿನ್ನೆಲೆ ಶೋಧ ಕಾರ್ಯಾಚರಣೆ ಮುಂದೂಡಲಾಗಿತ್ತು.

 ಇಂದು ಬೆಳಗ್ಗಿನಿಂದಲೇ ನಾಪೋಕ್ಲು ಪೊಲೀಸರು ಅಗ್ನಿಶಾಮಕದಳ ಹಾಗೂ ಸ್ಥಳೀಯರು ಅಯ್ಯಪ್ಪ ಎಂಬ ಯುವಕನ ಮೃತ ದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದು,ಇದೀಗ‌‌ ನೀರಿನಲ್ಲಿ ‌ಮುಳುಗಡೆಯಾಗಿದ್ದ ಅಯ್ಯಪ್ಪನ ಮೃತದೇಹ ಪತ್ತೆಯಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0