Kodagu

ನೆಲ್ಲಿಹುದಿಕೇರಿ:ಅತ್ತಿಮಂಗಲ ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ಸಾಂತ್ವನ ತಂಡದಿಂದ ತೆರವು

admincoorgdaily

ವರದಿ:ಝಕರಿಯ ನಾಪೋಕ್ಲು

ಸಿದ್ದಾಪುರ(COORGDAILY):ನೆಲ್ಲಿಹುದಿಕೇರಿಯಿಂದ ಅತ್ತಿಮಂಗಲಕ್ಕೆ ತೆರಳುವ ಮುಖ್ಯ ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ತೊಡಕುಂಟು ಮಾಡಿದ ಬೃಹತ್ ಗಾತ್ರದ ಮರವನ್ನು ಎಸ್ ವೈಎಸ್ ಸ್ವಾಂತ್ವನ ತಂಡ,ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ಎಸ್ ಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಮೂಲಕ ರಸ್ತೆಯಲ್ಲಿ ಉರುಳಿದ ಬೃಹತ್ ಮರವನ್ನು ತೆರವು ಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.