ಮರ ತೆರವುಗೊಳಿಸಿದ ಪಿಎಂ ರೆಸ್ಕ್ಯೂ ಟೀಮ್

May 27, 2025 - 10:41
 0  140
ಮರ ತೆರವುಗೊಳಿಸಿದ ಪಿಎಂ ರೆಸ್ಕ್ಯೂ ಟೀಮ್

ಕುಶಾಲನಗರ(Coorgdaily): ತಾಲೂಕಿನ ವಾಲ್ನೂರು ತ್ಯಾಗತ್ತೂರಿನಲ್ಲಿ‌ ಸುರಿದ ಭಾರಿ ಮಳೆಗಾಳಿಗೆ ಬಸ್ ತಂಗುದಾಣ ಹಾಗೂ ಮುಖ್ಯರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಸುಂಟಿಕೊಪ್ಪದ ಮುಖಂಡ ಪಿ.ಎಂ.ಲತೀಫ್ ಅವರ ನೇತೃತ್ವದ ಪಿ.ಎಂ ರೆಸ್ಕ್ಯೂ ಟೀಮ್ ಸಂಪೂರ್ಣವಾಗಿ ಕತ್ತರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಇದೇ ವೇಳೆ ಸ್ಥಳಕ್ಕೆ ಬಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಈ ರೆಸ್ಕ್ಯೂ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕೆಲ ಕಾಲ ಅಲ್ಲೇ ಇದ್ದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 0
Sad Sad 0
Wow Wow 0