ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಡಿಶುಂ.ಡಿಶುಂ..! ಲೆಕ್ಕ ಪರಿಶೋಧಕ ಅಧಿಕಾರಿ ಮತ್ತು ನೀರುಘಂಟಿಗನ ನಡುವೆ ಕಾಳಗ

ಸಿದ್ದಾಪುರ:- ಕಾಮಗಾರಿಯ ಬಿಲ್ ನೀಡುವ ವಿಚಾರವಾಗಿ ಗ್ರಾಮ ಪಂಚಾಯಿತಿ ಲೆಕ್ಕಪರಿಶೋಧಕ ಮತ್ತು ನೀರು ಘಂಟಿಗನ ನಡುವೆ ವಾಗ್ವಾದ ನಡೆದು ಹೊಡೆದಾಟದಲ್ಲಿ ಅಂತ್ಯವಾಗಿದೆ. ನೀರಿನ ಪೈಪ್ ಲೈನ್ ಅಳವಡಿಕೆಯ ಬೇನಾಮಿ ಗುತ್ತಿಗೆ ಪಡೆದ ನೀರು ಘಂಟಿಗ ಸುಬ್ರಮಣಿ ಕೆಲಸದ 9 ಬಿಲ್ ಮಾಡುವ ಸಲುವಾಗಿ ಖಡತವನ್ನು ಲೆಕ್ಕಪರಿಶೋಧನಾ ಅಧಿಕಾರಿ ಗೆ ನೀಡಿದ್ದು 2 ಖಡತ ಕಾಣೆಯಾಗಿದೆ ಈ ಸಂಬಂಧ ಒತ್ತಡ ಹೇರಿದದ್ದ ಎನ್ನಲಾಗಿದೆ. ಬಿಲ್ ಖಡತ ನೀಡುವಂತೆ ಹೌಹಾರಿದ್ದಾನೆ. ಈ ಸಂದರ್ಭದಲ್ಲಿ ಲೆಕ್ಕ ಪರಿಶೋದಕ ಖಡತ ತಮ್ಮ ಬಳಿ ಇಲ್ಲ ಅಭಿವೃದ್ಧಿ ಅಧಿಕಾರಿ ಬಂದ ಮೇಲೆ ಪಡೆದು ಕೊಳ್ಳುವಂತೆ ಸೂಚಿಸಿದ್ದು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕುಪಿತಗೊಂಡ ನೀರುಘಂಟಿ ಅವ್ಯಾಚ ಶಬ್ದಗಳಿಂದ ನಿಂಧಿಸಿ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಇಬ್ಬರ ಒಡೆದಾಟವನ್ನು ಕೆಲಕಾಲ ಮೂಕ ಪ್ರೇಕ್ಷಕರಂತೆ ವೀಕ್ಷಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಮಧ್ಯ ಪ್ರವೇಶಿಸಿ ಅಧಿಕಾರಿ ಮತ್ತು ವಾಟರ್ಮ್ಯಾನ್ ಜಗಳ ಬಿಡಿಸಿದ್ದಾರೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಜಾಫರಾಲಿ ಪತ್ರಿಕೆಯೊಂದಿಗೆ ಮಾತನಾಡಿ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿ ಕೆಲವು ಸದಸ್ಯರುಗಳು ಬೇನಾಮಿ ಹೆಸರಿನಲ್ಲಿ ಕಾಮಗಾರಿ ನಡೆಸುತ್ತಿದ್ದು ಅಧಿಕಾರಿಗಳಿಗೆ ಬಿಲ್ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.ಸದಸ್ಯರು ಮತ್ತು ಸಿಬ್ಬಂದಿಗಳು ಕಾಮಗಾರಿ ಗುತ್ತಿಗೆ ಪಡೆಯುವುದು ನಿಯಮ ಬಾಹಿರವಾಗಿದ್ದು ಅಧಿಕಾರಿಗಳು ಬಿಲ್ ಮಾಡದಿದ್ದರೆ ಈ ರೀತಿ ಸಿಬ್ಬಂದಿಗಳನ್ನು ಬಿಟ್ಟು ಗೂಸಾ ನೀಡಲಾಗುತ್ತಿದ್ದು ಈ ಹಿಂದೆ ಕೂಡ ಇಂತಹ ಸನ್ನಿವೇಶಗಳು ನಡೆದಿದೆ ಎಂದರು.
ಸದಸ್ಯರ ಕುಮ್ಮಕ್ಕು ವಿನಿಂದ ಈ ಘಟನೆ ನಡೆದಿದ್ದು ಅಧಿಕಾರಿಗಳಿಗೆ ರಕ್ಷಣೆ ಇಲ್ಲದೆ ಕೆಲಸ ನಿರ್ವಹಿಸುವಂತಾಗಿದೆ. ಮೇಲಧಿಕಾರಿಗಳು ಕೂಡಲೆ ಇಲ್ಲಿ ಮಧ್ಯ ಪ್ರವೇಶಿಸಿ ಅಧಿಕಾರಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.ಹಾಗೂ ತಪ್ಪಿತಸ್ಥರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಮಾಜಿ ಅಧ್ಯಕ್ಷೆ ರೀನಾತುಳಸಿ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಾಮಗಾರಿಗಳು ಪಂಚಾಯಿತಿ ಸದಸ್ಯರೆ ಮಾಡುತ್ತಿದ್ದು ಕಾಮಗಾರಿ ಮುಗಿಯುವ ಮುನ್ನವೇ ಬಿಲ್ ಪಾವತಿ ಆಗಿರುವ ಬಗ್ಗೆ ಆರೋಪವು ಕೇಳಿಬಂದಿದ್ದು ಉನ್ನತ ತನಿಖೆ ನಡೆಸುವಂತೆ ಸಾರ್ವಜನಿಕರು ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ .
What's Your Reaction?






