ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ನ ನೂತನ ಕಛೇರಿ ಉದ್ಘಾಟನೆ: ಯುವಪೀಳಿಗೆಗೆ ಕೊಡಗಿನ ಪ್ರವಾಸೋದ್ಯಮದಲ್ಲಿ ವಿಫುಲ ಅವಕಾಶ - ಜಿಲ್ಲಾಧಿಕಾರಿ ವೆಂಕಟ್ ರಾಜಾ
ಮಡಿಕೇರಿ:ಕೊಡಗಿನ ಮೂಲದ ಯುವಪೀಳಿಗೆ ಮತ್ತೆ ಜಿಲ್ಲೆಗೆ ಮರಳುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಂಬಂಧಿತ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೊಡಗು ಪ್ರವಾಸೋದ್ಯಮ ಇಲಾಖೆ ಕಛೇರಿಯಲ್ಲಿ ಕೂಗ್೯ ರೆಸಾಟ್, ಹೋಟೇಲ್ ಅಸೋಸಿಯೇಷನ್ ನ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದ ವೆಂಕಟರಾಜಾ, ಉದ್ಯೋಗವಕಾಶ ಅರಸಿ ಹೊರನಾಡಿಗೆ ತರಳಿರುವ ಕೊಡಗಿನ ಅನೇಕ ಯುವಕ, ಯುವತಿಯರು ಮತ್ತೆ ಕೊಡಗಿಗೆ ಮರಳಲು ಸ್ಥಳೀಯವಾಗಿ ಪ್ರವಾಸೋದ್ಯಮ ಚಟುವಟಿಕೆಗಳು ಸಹಕಾರಿಯಾಗಬೇಕು.
ಪ್ರವಾಸೋದ್ಯಮಿಗಳಲ್ಲಿ ಪರಸ್ಪರ ಸ್ಪಧೆ೯ಗಿಂತ ಎಲ್ಲಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಕೊಡಗಿನಲ್ಲಿ ಸುಸ್ಥಿರ ಪ್ರವಾಸೋದ್ಯಮ ಸುಗಮವಾಗಿರುವಂತೆ ಕಾಯ್ದುಕೊಳ್ಳುವುದು ಮುಖ್ಯವಾಗಬೇಕೆಂದು ಹೇಳಿದರು. ಕೊಡಗಿನ ಪ್ರವಾಸೋದ್ಯಮಿಗಳು ಜನಸ್ಮೇಹಿಯಾಗಿದ್ದಲ್ಲಿ ಒಮ್ಮೆ ಭೇಟಿ ನೀಡಿದ ಪ್ರವಾಸಿಗರು ಮತ್ತೆ ಮತ್ತೆ ಕೊಡಗಿಗೆ ಪ್ರವಾಸ ಬರುವುದು ಖಂಡಿತಾ ಎಂದೂ ಕಿವಿಮಾತು ಹೇಳಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ,
ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಕಳೆದ ತಿಂಗಳು ಆಯೋಜಿಸಿದ್ದ ಸ್ವಚ್ಚ ಕೊಡಗು ಸುಂದರ ಕೊಡಗು ಸ್ವಚ್ಚತಾ ಅಭಿಯಾನ ರಾಜ್ಯದ ಗಮನವನ್ನೇ ಸೆಳೆದಿದೆ. ಸ್ವಯಂ ಪ್ರೇರಿತರಾಗಿ ಕೊಡಗಿನ ಜನತೆ ಈ ಅಭಿಯಾನಕ್ಕೆ ಸಹಕಾರ ನೀಡಿದ್ದು ಜಿಲ್ಲೆಯ ಜನತೆಯಲ್ಲಿ ಸ್ವಚ್ಚ ಕೊಡಗಿನ ಬಗೆಗಿನ ಚಿಂತನೆಗೆ ನಿದಶ೯ನವಾಗಿದೆ ಎಂದು ಶ್ಲಾಘಿಸಿದರು. ಕೊಡಗನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿಯೂ ಜಿಲ್ಲೆಯ ಜನತೆಯ ಸವ೯ ಸಹಕಾರವನ್ನೂ ಈ ಸಂದಭ೯ ಜಿಲ್ಲಾಧಿಕಾರಿಗಳು ಕೋರಿದರು.
ಕೊಡಗಿಗೆ ಭೇಟಿ ನೀಡುವ ಪ್ರವಾಸಿರಿಗೆ ಸಾಕಷ್ಟು ಮಾಹಿತಿ ನೀಡುವ ನಿಟ್ಟಿನಲ್ಲಿ ಕೂಗ್೯ ಹೋಟೇಲ್ , ರೆಸಾಟ್೯ ಅಸೋಸಿಯೇಷನ್ ನ ಈ ನೂತನ ಕಛೇರಿ ಸಹಕಾರಿಯಾಗಲಿ ಎಂದೂ ವೆಂಕಟ್ ರಾಜಾ ಹಾರೈಸಿದರು.
ಕೂಗ್೯ ಹೋಟೇಲ್ , ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಪ್ರಥಮ ಬಾರಿಗೆ ಕೂಗ್೯ ಹೋಟೇಲ್ , ರೆಸಾಟ್೯ ಅಸೋಸಿಯೇಷನ್ ಗೆ ಪ್ರತ್ಯೇಕ ಕಛೇರಿ ಲಭಿಸುವಂತಾಗಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೖದ್ದಿ ನಿಟ್ಟಿನಲ್ಲಿ ಅಸೋಸಿಯೇಷನ್ ಅನೇಕ ಕಾಯ೯ಯೋಜನೆ ರೂಪಿಸುತ್ತಿದ್ದು, ಕೊಡಗು ಉತ್ಸದ ಚಿಂತನೆಯೂ ಇದೆ ಎಂದರು.
ಕೂಗ್೯ ಹೋಟೇಲ್ , ರೆಸಾಟ್೯ ಅಸೋಸಿಯೇಷನ್ ಪ್ರಧಾನ ಕಾಯ೯ದಶಿ೯ ನಾಸಿರ್ ಅಹಮ್ಮದ್, ಉಪಾಧ್ಯಕ್ಷರಾದ ಜಾಹೀರ್ ಅಹಮ್ಮದ್, ಬಿ. ಎಸ್. ಸುಂದರ್ , ರತೀಶ್, ಬಿ. ಸಿ. ಮಂಜುನಾಥ್, ಜಂಟಿ ಕಾರ್ಯದರ್ಶಿ ಡಿ.ಕೆ. ಮಂಜುನಾಥ್, ಖಚಾಂಜಿ ಸಾಗರ್ ಗಣಪತಿ, ಅಸೋಸಿಯೇಷನ್ ನಿಕಟಪೂವ೯ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಗೌರವ ಸಲಹೆಗಾರ ಜಿ.ಚಿದ್ವಿಲಾಸ್, ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
