ಗೋಣಿಕೊಪ್ಪ;ಲೋಡರ್ ಮೇಲೆ ಚೂರಿಯಿಂದ ಚುಚ್ಚಿದ ಬಸ್ಸ್ ಚಾಲಕ

ಗೋಣಿಕೊಪ್ಪ;ಲೋಡರ್ ಮೇಲೆ ಚೂರಿಯಿಂದ ಚುಚ್ಚಿದ ಬಸ್ಸ್ ಚಾಲಕ
ಸಾಂದರ್ಭಿಕ ಚಿತ್ರ

ಗೋಣಿಕೊಪ್ಪಲು; ಗೋಣಿಕೊಪ್ಪದಲ್ಲಿ ಬೆಳಗಿನ ಜಾವ ಲೋಡರ್ ಒಬ್ಬನ ಮೇಲೆ ಬಸ್ ಚಾಲಕನೊಬ್ಬ ಚೂರಿಯಿಂದ ಚುಚ್ಚಿದ ಘಟನೆ ನಡೆದಿದೆ. ಬಸ್ ನಿಲ್ದಾಣದ ಶಬರಿ ಬೇಕರಿಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಲೋಡರ್ ಸಬ್ಬಲ್ ಎಂಬತನ ಎಡಭಾಗದ ಹೊಟ್ಟೆಯ ಭಾಗಕ್ಕೆ, ಬಸ್ಸಿನ ಚಾಲಕ ಪ್ರವೀಣ್ ಎಂಬಾತ ಚೂರಿಯಿಂದ ಚುಚ್ಚಿರುವುದಾಗಿ ತಿಳಿದು ಬಂದಿದೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಬ್ಬಲ್ ನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.