ಹೊಸಪಟ್ಟಣ; ಪೂಜೆ ವೇಳೆ ಹೆಜ್ಜೇನು ದಾಳಿ
ಕುಶಾಲನಗರ,ಏ. 14: ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವರ ವಾರ್ಷಿಕ ಪೂಜೋತ್ಸವ ವೇಳೆ ಹೆಚ್ಚೇನು ಭಕ್ತರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ದೇವರ ಉತ್ಸವ ಮೂರ್ತಿಗಳನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ಗಂಗಾ ಪೂಜೆ ನಡೆಸುತ್ತಿದ್ದ ವೇಳೆ, ದಿಢೀರನೇ ಹೆಚ್ಚೇನು ಈ ಹುಳಗಳು ಗ್ರಾಮದ ಬಹುತೇಕ ಮಂದಿಯ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ.
ಗ್ರಾಮದೇವತಾ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಅವರ ತೋಟದಲ್ಲಿ ತೆರಳಿ ಕಾವೇರಿ ನದಿಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ, ದಟ್ಟವಾದ ಮರಗಳ ಮೇಲಿಂದ ಬಂದ ಜೇನು ಹುಳುಗಳು ಒಂದೇ ಸಮನೆ - ಎಲ್ಲರ ಮೇಲೆ ದಾಳಿ ಇಷ್ಟೊಡನೇ ಬಹುತೇಕ ಮಂದಿ ದೇವಾಲಯದತ್ತ ಓಡಿ ಬಂದರು.
ಕೆಲವರು ತಮ್ಮ ಮನೆಗಳಿಗೆ ತೆರಳಿ ನಿಟ್ಟುಸಿರುಬಿಟ್ಟರು. ಕೆಲವರು ದೇವರಿಗೆ ತಪ್ಪು ಕಾಣಿಕೆ ಹಾಕಿ ಪ್ರಾರ್ಥಿಸಿದುದು ಕಂಡು ಬಂತು. ಅದೃಷ್ಟವಶಾತ್ ಭಕ್ತರು ಪ್ರಾಣಾಪಾಯದಿಂದ ಪಾರಾದರು.