ಮಡಿಕೇರಿ ದಸರಾ ಜನೋತ್ಸವ: DYSP ಮೇಲೆ ಹಲ್ಲೆ ಪ್ರಕರಣ,ಒಂದೇ ದಿನದಲ್ಲಿ ಆರೋಪಿಗೆ ಜಾಮೀನು
ಮಡಿಕೇರಿ: ದಸರಾದ ವೇದಿಕೆಯಲ್ಲಿ ಯಕ್ಷಿತ್ ಎಂಬ ಯುವಕ ಡಿ.ವೈ.ಎಸ್.ಪಿ ಸೂರಜ್ ಅವರಿಗೆ ಹಲ್ಲೆ ಮಾಡಿ ಗಾಯಗೊಳಿಸಿದಕ್ಕಾಗಿ ಶುಕ್ರವಾರ ಮಡಿಕೇರಿ ನಗರ ಪೊಲೀಸರು ಆತನನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಬೆನ್ನಲ್ಲೇ ಇಂದು ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.