ಸುವಣ೯ ಮಹೋತ್ಸವ ಸಂಭ್ರಮದಲ್ಲಿ ಮಡಿಕೇರಿ ಇನ್ನರ್ ವೀಲ್ : ಮಡಿಕೇರಿ ಇನ್ನರ್ ವೀಲ್ ನಿಂದ ಅಶ್ವಿನಿ ಆಸ್ಪತ್ರೆಯಲ್ಲಿ ಮೆಡಿಕಲ್ ಇಕ್ಯುಪ್ ಮೆಂಟ್ ಬ್ಕಾಂಕ್

ಸುವಣ೯ ಮಹೋತ್ಸವ ಸಂಭ್ರಮದಲ್ಲಿ ಮಡಿಕೇರಿ ಇನ್ನರ್ ವೀಲ್ :  ಮಡಿಕೇರಿ ಇನ್ನರ್ ವೀಲ್ ನಿಂದ ಅಶ್ವಿನಿ ಆಸ್ಪತ್ರೆಯಲ್ಲಿ  ಮೆಡಿಕಲ್ ಇಕ್ಯುಪ್ ಮೆಂಟ್ ಬ್ಕಾಂಕ್

ಮಡಿಕೇರಿ: ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ಇನ್ನರ್ ವೀಲ್ ಜಿಲ್ಲೆ 318 ನ ಮಡಿಕೇರಿ ಘಟಕ ಇದೀಗ ಸುವಣ೯ ಮಹೋತ್ಸವ ಸಂಭ್ರಮದಲ್ಲಿದ್ದು, ಇದೇ 10 ರಂದು ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಸುವಣ೯ ಮಹೋತ್ಸವ ಸಮಾರಂಭ ಆಯೋಜಿತವಾಗಿದೆ ಎಂದು ಸುವಣ೯ ಸಮಾರಂಭ ಸಮಿತಿಯ ಅಧ್ಯಕ್ಷೆ ಲತಾಚಂಗಪ್ಪ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಲತಾ ಚಂಗಪ್ಪ, ಸೋಮವಾರ ಸಂಜೆ 6 ಗಂಟೆಗೆ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಇನ್ನರ್ ವೀಲ್ ಜಿಲ್ಲೆಯ ಅಧ್ಯಕ್ಷೆ ಶಬರಿ ಕಡಿದಾಳ್ ಅಧ್ಯಕ್ಷತೆ ವಹಿಸಲಿದ್ದು, ಅಂದು ವಿವಿಧ ಕಾಯ೯ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಲಲಿತಾ ರಾಘವನ್ ಕಾಯ೯ದಶಿ೯ ನಮಿತಾ ರೈ, ಸುವಣ೯ ಮಹೋತ್ಸವ ಸಮಿತಿಯ ಅಧ್ಯಕ್ಷೆ ಲತಾ ಚಂಗಪ್ಪ, ಕಾಯ೯ದಶಿ೯ ಶಫಾಲಿ ರೈ ಪಾಲ್ಗೊಳ್ಳಲಿದ್ದಾರ ಎಂದು ಲತಾಚಂಗಪ್ಪ ತಿಳಿಸಿದರು. ಇನ್ನರ್ ವೀಲ್ ಸಂಸ್ಥೆಯು ಮಡಿಕೇರಿಯಲ್ಲಿ 1975 ನೇ ಜೂನ್ 27 ರಂದು ಉದ್ಘಾಟನೆಯಾಗಿತ್ತು.

 ಉಮಾಉಲ್ಲಾಳ್, ಡಾ. ಜಯಲಕ್ಷ್ಮಿ ಪಾಟ್ಕರ್ ಸ್ಥಾಪಕಾಧ್ಯಕ್ಷರಾಗಿ, ಅಲಮೇಲು ಗಿರಿ ಪ್ರಧಾನ ಕಾಯ೯ದಶಿ೯ಯಾಗಿದ್ದ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯನ್ನು ಕಮಲ ಪದ್ಮನಾಭನ್ ಉದ್ಘಾಟಿಸಿದ್ದರು. 12 ಸದಸ್ಯರಿಂದ ಆರಂಭವಾಗಿದ್ದ ಮಡಿಕೇರಿ ಇನ್ನರ್ ವೀಲ್ ಇದೀಗ 46 ಸದಸ್ಯರನ್ನು ಹೊಂದಿದೆ. ಇನ್ನರ್ ವೀಲ್ ಜಿಲ್ಲೆ 318 ಗೆ ಈವರೆಗೆ ಮಡಿಕೇರಿ ಇನ್ನರ್ ವೀಲ್ ನಿಂದ ಮಿನ್ನಿ ಬೋಪಯ್ಯ, ಪ್ರೇಮಾಕಾಳಪ್ಪ, ಪೂಣಿ೯ಮಾ ರವಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ಸಮಥ೯ ಕಾಯ೯ನಿವ೯ಹಣೆಗೆ ಖ್ಯಾತರಾಗಿದ್ದರು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಬೆಳ್ಳಿ ಹಬ್ಬದ ವಷ೯ದಲ್ಲಿ ಬೇಲಾ ಪೊನ್ನಪ್ಪ ಅಧ್ಯಕ್ಷರಾಗಿದ್ದರೆ, 50 ವಷಾ೯ಚರಣೆ ಸಂದಭ೯ ಲಲಿತಾ ರಾಘವನ್ ಅಧ್ಯಕ್ಷರಾಗಿದ್ದಾರೆ.ಎಂದೂ ಅವರು ತಿಳಿಸಿದರು. ಸುವಣ೯ ಸಂಭ್ರಮದ ಮಹತ್ವದ ಯೋಜನೆ - ಮೆಡಿಕಲ್ ಇಕ್ಯುಪ್ ಮೆಂಟ್ ಬ್ಯಾಂಕ್ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಸುವಣ೯ ಮಹೋತ್ಸವ ಸಂದಭ೯ ಅನೇಕ ಜನಪರ ಕಾಯ೯ಯೋಜನೆ ಹಮ್ಮಿಕೊಳ್ಳಲಾಗಿದೆ.

 ಸುವಣ೯ ಸಂಭ್ರಮದ ಹಿನ್ನಲೆಯಲ್ಲಿ ಇನ್ನರ್ ವೀಲ್ ಸಂಸ್ಥೆಯು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಮೆಘಾ ಯೋಜನೆಯಾಗಿ ಮೆಡಿಕಲ್ ಇಕ್ಯುಪ್ ಮೆಂಟ್ ಬ್ಯಾಂಕ್ ಪ್ರಾರಂಭಿಸಲಿದೆ. ಅಶ್ವಿನಿ ಆಸ್ಪತ್ರೆಗೆ ಇನ್ನರ್ ವೀಲ್ ಸಂಸ್ಥೆಯಿಂದ 4 ವೀ್ಲ್ ಚೇರ್, 4ಕ್ರಚಸ್, 3 ವಾಕರ್ , 2, ವಾಟರ್ ಬೆಡ್, ಸುಸಜ್ಜಿತ ಬೆಡ್ ಸೇರಿದಂತೆ ಅಂದಾಜು 1.20 ಲಕ್ಷ ರು. ಮೌಲ್ಯದ ಆರೋಗ್ಯ ಉಪಕರಣಗಳನ್ನು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ನವಂಬರ್ 10 ರಂದು ಸಂಜೆ 4 ಗಂಟೆಗೆ ನೀಡಲಿದ್ದಾರೆ.

ಈ ಉಪಕರಣಗಳನ್ನು ಖರೀದಿಸಲು ಆಥಿ೯ಕವಾಗಿ ಸಬಲರಲ್ಲದ ಆದರೆ ಉಪಕರಣಗಳು ಅತ್ಯಗತ್ಯವಾಗಿರುವ ರೋಗಿಗಳಿಗೆ ಮನೆಗಳಲ್ಲಿ ಬಳಸಲು ಸಾಧ್ಯವಾಗುವಂತೆ ಅವರ ಉಪಯೋಗಕ್ಕಾಗಿ ಆಸ್ಪತ್ರೆಯಿಂದ ನಿಗಧಿತ ಬಾಡಿಗೆ ದರದ ಆಧಾರದಲ್ಲಿ ನೀಡಲಾಗುತ್ತದೆ. ಬಳಕೆಯಾದ ನಂತರ ರೋಗಿಗಳು ಆ ಉಪಕರಣವನ್ನು ಮರಳಿ ಅಶ್ವಿನಿ ಆಸ್ಪತ್ರೆಗೆ ಹಿಂದಿರಿಗಿಸಬೇಕಾಗಿದೆ ಎಂದೂ ಸುದ್ದಿಗೋಷ್ಟಿಯಲ್ಲಿ ಲತಾಚಂಗಪ್ಪ ಮಾಹಿತಿ ನೀಡಿದರು. 

 ಸುದ್ದಿಗೋಷ್ಟಿಯಲ್ಲಿ ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಲಲಿತಾ ರಾಘವನ್, ಕಾಯ೯ದಶಿ೯ ನಮಿತಾ ರೈ., ಸುವಣ೯ ಮಹೋತ್ಸವ ಆಚರಣಾ ಸಮಿತಿಯ ಕಾಯ೯ದಶಿ೯ ಶಫಾಲಿ ರೈ, ನಿದೇ೯ಶಕಿ ಉಮಾಗೌರಿ ಶಿವಪ್ರಸಾದ್ ಉಪಸ್ಥಿತರಿದ್ದರು.