ಪಾಲಿಬೆಟ್ಟ;ಗಾಂಜಾ ಸೇವಿಸಿ ಗಲಾಟೆ:ಇಬ್ಬರು ಕಾರ್ಮಿಕರ ಬಂಧನ
ಸಿದ್ದಾಪುರ:ಗಾಂಜಾ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ.
ಪಾಲಿಬೆಟ್ಟದ ನಿವಾಸಿ, ಕಾಫಿ ತೋಟದ ಕಾರ್ಮಿಕರಾದ ಪ್ರದ್ಯುಮ್ನ ಹಾಗೂ ಪ್ರಹ್ಲಾದ್ ಎಂಬವರು ಎಂಬವರೊಂದಿಗೆ ಶ್ರೀಶೋಭ್ ಗಲಾಟೆ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಬಂದ ಹಿನ್ನೆಲೆ ಸ್ಥಳಕ್ಕೆ ತೆರಳಿ ಇಬ್ಬರನ್ನು ವಶಪಡಿಸಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಂದರ್ಭ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಇಬ್ಬರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.