ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪಾವನ ಹೆಚ್.ವಿ ಅವಿರೋಧ ಆಯ್ಕೆ

ಕೊಡ್ಲಿಪೇಟೆ :ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪಾವನ ಗಗನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಿಂದೆ ಅಧ್ಯಕ್ಷರಾಗಿದ್ದ ರೇಣುಕಾಮೇದಪ್ಪ ರವರು ರಾಜಿನಾಮೆ ನೀಡಿದ ಕಾರಣ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.
ಒಪ್ಪಂದಂತೆ ಮುಂದಿನ ಅವದಿಗೆ ಅಧ್ಯಕ್ಷ ಸ್ಥಾನಕ್ಕೆ ಪಾವನ ಅವರು ಮಾತ್ರ ನಾಮಪತ್ರ ಸಲ್ಲಿಸಿದರು.ಒಟ್ಟು 9 ಸದಸ್ಯರುಗಳಲ್ಲಿ 7 ಜನ ಹಾಜರಾಗಿದ್ದರು.ಸೋಮವಾರಪೇಟೆ ತಹಶಿಲ್ದಾರ್ ಕ್ರಷ್ಣಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.ಯಾವುದೇ ಸದಸ್ಯರುಗಳು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಘೋಷಿಸಿದರು.ಅಧ್ಯಕ್ಷರ ಆಯ್ಕೆಯ ಚುನಾವಣಾ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದ್ರಾಕ್ಷಾಯಿಣಿ , ಸದಸ್ಯರುಗಳಾದ ಮಹಮ್ಮದ್ ಹನೀಫ್ , ದೊಡ್ಡಯ್ಯ ,ಲೀನಾಪರಮೇಶ್ ,ರೇಣುಕಾ ಮೇದಪ್ಪ , ವಿನೋದಾಆನಂದ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಪಾವನ ಗಗನ್, ಎಲ್ಲಾ ಸದಸ್ಯರುಗಳ ಸಹಕಾರದೊಂದಿಗೆ ಅಧ್ಯಕ್ಷೆ ಯಾಗಿ ಆಯ್ಕೆಯಾಗಿದ್ದು ,ಎಲ್ಲರ ಸಲಹೆ ಪಡೆದು ಶಾಸಕರ ಸಹಕಾರದೊಂದಿಗೆ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೊಕೇಶ್ ಹಾಗೂ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಈ ಸಂದರ್ಭದಲ್ಲಿ ಹಾಜರಿದ್ದು ನೂತನ ಅದ್ಯಕ್ಷರಿಗೆ ಶುಭಕೋರಿ ಮಾತನಾಡಿ,ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯೆ ಅಧ್ಯಕ್ಷೆಯಾಗಿದ್ದು ,ಪಕ್ಷಬೇಧ ಮರೆತು ಎಲ್ಲರನ್ನು ವಿಶ್ವಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಖಜಾಂಜಿ ಚೇತನ್ ,ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷ ಕಿರಣ್,ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ನಿಸಾರ್,ಕೊಡ್ಲಿಪೇಟೆ ಪ್ಯಾಕ್ಸ್ ನಿರ್ದೇಶಕ ತೇಜಕುಮಾರ್ ,ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್ ,ತಾಲೂಕು ಕೆ.ಡಿ.ಪಿ.ಸದಸ್ಯ ವೇದಕುಮಾರ್,ಪಕ್ಷದ ಮುಖಂಡರಾದ ಸಾಬ್ಜಾನ್ , ಮೇದಪ್ಪ ,ವೆಂಕಟೇಶ್ ,ಪುಟ್ಟರಾಜು ರೆಹಮಾನ್ , ಹನೀಫ್ ,ಹಮೀದ್ ,ಮಹಮ್ಮದ್ ,ಗಣೇಶ್,ಇದ್ದರು.
What's Your Reaction?






