ಕುಶಾಲನಗರ ನಿವಾಸಿ ಮನ್ಸೂರ್ ಅಲಿ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ

ಕುಶಾಲನಗರ ನಿವಾಸಿ ಮನ್ಸೂರ್ ಅಲಿ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ

ಕುಶಾಲನಗರ, ಏ 22: ಗದಗ ಜಿಲ್ಲೆಗೆ ಗಡಿಪಾರಾಗಿದ್ದ ಕುಶಾಲನಗರದ ದಂಡಿನ ಪೇಟೆ ನಿವಾಸಿ ಮನ್ಸೂರ್ ಅಲಿ ಕೊಡಗು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತಾತ್ಕಾಲಿಕ ತಡೆಯಾಜ್ಞೆ ಯೊಂದಿಗೆ ಮರಳಿ ಕುಶಾಲನಗರಕ್ಕೆ ಆಗಮಿಸುತ್ತಿದ್ದಾರೆ. ಕ್ರಿಮಿನಲ್ ರಿವಿಷನ್ ಅರ್ಜಿ ಅನ್ವಯ ಮುಂದಿನ ಆದೇಶದ ತನಕ ಗಡಿಪಾರು ಆದೇಶಕ್ಕೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.