ಕೊಡಗಿನ ಮೂವರು ಶಿಕ್ಷಕರುಗಳಿಗೆ ಯೋಗ ಸಂಸ್ಥೆಯಿಂದ ಪ್ರಶಸ್ತಿ

ಕೊಡಗಿನ ಮೂವರು ಶಿಕ್ಷಕರುಗಳಿಗೆ ಯೋಗ ಸಂಸ್ಥೆಯಿಂದ ಪ್ರಶಸ್ತಿ

ಸೋಮವಾರಪೇಟೆ:ಕೊಡಗಿನ ಮೂವರು ಶಿಕ್ಷಕರುಗಳಿಗೆ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆಯ ವತಿಯಿಂದ ಪ್ರಶಸ್ತಿ ನೀಡಿ ಈಚೆಗೆ ಗೌರವಿಸಲಾಯಿತು. ರೋಟರಿ ಕ್ಲಬ್ ಆಫ್ ಬೆಂಗಳೂರು ಕಲ್ಯಾಣ್‌ಗಿರಿ ಮತ್ತು ಯೋಗ ಯುನಿವರ್ಸಿಟಿ ಆಫ್ ದಿ ಅಮೇರಿಕಾಸ್ ಸಹಭಾಗಿತ್ವದಲ್ಲಿ ಬೆಂಗಳೂರಿನ ಶ್ರೀ ಪುಟ್ಟಣ ಚೆಟ್ಟಿ ಟೌನ್ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲೆಯ ಮಡಿಕೇರಿಯ ಯೋಗ ಭಾರತಿಯ ಯೋಗ ಶಿಕ್ಷಕ ಮಹೇಶ್‌ಕುಮಾರ್ ಅವರಿಗೆ ಜೀವಮಾನದ ಸಾಧನೆಗಾಗಿ ಯೋಗ ಸಾಧಕ ಪ್ರಶಸ್ತಿ, ಸೋಮವಾರಪೇಟೆ ನಿರಂತರ ಯೋಗ ಕೇಂದ್ರದ ಶಿಕ್ಷಕ ಕಿಬ್ಬೆಟ್ಟ ಗಣೇಶ್ ಅವರಿಗೆ ಯೋಗ ರತ್ನ ಹಾಗು ಕುಶಾಲನಗರದ ಯೋಗ ಶಿಕ್ಷಕಿ ಕೆ. ಅಮಿತ ಸತೀಶ್ ಅವರಿಗೆ ಯೋಗ ಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾಸ್‌ನ ಕುಲಪತಿ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ರೋಟರಿ ಜಿಲ್ಲಾ ಗವರ್ನರ್ ಎಲಿಜಬೆತ್ ಚೆರಿಯನ್, ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಯೋಗಿ ದೇವರಾಜ್, ಹೋಲಿಸ್ಟಿಕ್ ಹೆಲ್ತ್ ಕನ್ಸಲ್ಟಂಟ್ ನಿರ್ದೇಶಕ ದಕ್ಷಿಣಮೂರ್ತಿ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.