ಮಳೆ ಹಾನಿ ಪ್ರದೇಶಗಳಿಗೆ ಯುವ ಕಾಂಗ್ರೆಸ್ ಭೇಟಿ,ಪರಿಶೀಲನೆ: ಮಳೆಯಿಂದಾಗಿ ಹಾನಿಯಾದ ಮನೆಗೆ ಶೀಟ್ ವಿತರಿಸಿದ ಯುವ ಕಾಂಗ್ರೆಸ್ ಪದಾಧಿಕಾರಿಗಳು
admincoorgdaily


ಮಡಿಕೇರಿ: ಶಾಸಕರಾದ ಡಾ.ಮಂತರ್ ಗೌಡ ಅವರ ನಿರ್ದೇಶನದ ಮೇರೆಗೆ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮೈಸಿ ಕತ್ತಣಿರ ಅವರ ನೇತೃತ್ವದಲ್ಲಿ ಗುರುವಾರ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಡಕ್ಕೇರಿ ,ಪಾಲೆಮಾಡು,ಹಾಗೂ ವಾಟೆಕಾಡು ಮಳೆ ಹಾನಿ ಪ್ರದೇಶಗಳಿಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿದರು.
ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿತಗೊಂಡ ಕಬಡಕ್ಕೇರಿಯ ಮನೆಯೊಂದಕ್ಕೆ ಯುವ ಕಾಂಗ್ರೆಸ್ ವತಿಯಿಂದ ಶೀಟ್ ಅಳವಡಿಸಿಕೊಡುವುದಾಗಿ ಹೇಳಿದರು. ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ,ಮಾತನಾಡಿದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ,ಮೂರ್ನಾಡು,ಹೊದ್ದೂರುಭಾಗಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ಮನೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಯುವ ಕಾಂಗ್ರೆಸ್ ಪದಾಧಿಕಾರಿಗಳು ಆಲಿಸಿದ್ದೇವೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಸೂಚನೆ ಮೇರೆಗೆ ಯುವ ಕಾಂಗ್ರೆಸ್ ಮಳೆ ಹಾನಿ ಪ್ರದೇಶಳಿಗೆ ಭೇಟಿ ಜನರ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ.ಮಡಿಕೇರಿ ಕ್ಷೇತ್ರದಾದ್ಯಂತ ಯುವ ಕಾಂಗ್ರೆಸ್ ಮಳೆಯಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದೇವೆ. ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಡಕ್ಕೇರಿಯಲ್ಲಿ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿತಗೊಂಡ ಮನೆಯವರಿಗೆ ಯುವ ಕಾಂಗ್ರೆಸ್ ವತಿಯಿಂದ ಶೀಟ್ ಅಳವಡಿಸಿಕೊಟ್ಟಿದ್ದೇವೆ.
ತುರ್ತು ಸಂದರ್ಭಗಳಲ್ಲಿ ಯುವ ಕಾಂಗ್ರೆಸ್ ಜನರ ಸಮಸ್ಯೆಗಳಿಗೆ ಸದಾ ಸನ್ನದ್ಧರಾಗಿದ್ದೇವೆ ಎಂದು ಮೈಸಿ ಕತ್ತಣಿರ ಹೇಳಿದರು. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಹುಲ್ ಮಾರ್ಷಲ್, ಮಡಿಕೇರಿ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಕವನ್, ಕಾಂಗ್ರೆಸ್ ಮುಖಂಡರಾದ ಯೂನುಸ್ ,ಪಂಚಾಯಿತಿ ಸದಸ್ಯರಾದ ಮೊಣ್ಣಪ್ಪ, ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸುಹೇಲ್ ಹಾಗೂ ಜಾಫರ್ ಇದ್ದರು.