ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ:ಅಂತೂ,ಇಂತೂ, ವಿಚಾರಣೆಗೆ ಹಾಜರಾದ ತೆನ್ನೀರ ಮೈನಾ

ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ:ಅಂತೂ,ಇಂತೂ, ವಿಚಾರಣೆಗೆ ಹಾಜರಾದ ತೆನ್ನೀರ ಮೈನಾ

ಬೆಂಗಳೂರು:ಬಿಜೆಪಿ ಕಾರ್ಯಕರ್ತ ಕೊಡಗು ಮೂಲದ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಸಂಭಂದಿಸಿದಂತೆ ಎಫ್.ಐ.ಆರ್ ನಲ್ಲಿ A1 ಆರೋಪಿಯಾಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ರಾದ ತೆನ್ನಿರ ಮೈನಾರವರು BNS ಕಲಂ 35(3) ರಡಿ ಹೆಣ್ಣೂರು ಪೋಲೀಸರು ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ ಮೇರೆಗೆ ಶುಕ್ರವಾರ ಹೆಣ್ಣೂರು ಠಾಣೆಯ ಪೋಲೀಸ್ ಇನ್ಸ್‌ಪೆಕ್ಟರ್ ಶ್ರೀ ದೀಪಕ್ ಎಲ್ ರವರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲದಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಒಪ್ಪಿಸಿದ್ದಾರೆ.ವಿಚಾರಣೆ ನಡೆಸಿದ ಪೋಲೀಸರು ಪ್ರಕರಣದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಮತ್ತು ವಿಚಾರಣೆಗೆ ಅಗತ್ಯ ಕಂಡು ಬಂದಲ್ಲಿ ಹಾಜರಾಗುವಂತೆ ತೆನ್ನಿರ ಮೈನಾ ರವರಿಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಕೊಡಗು ಮೂಲದ ವಿನಯ್ ಸೋಮಯ್ಯ ನವರು ಏಪ್ರಿಲ್ 4 ರಂದು ಮುಂಜಾನೆ ನಾಗವಾರದ ತಮ್ಮ ಕಛೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಆತ್ಮಹತ್ಯೆಗೂ ಮುನ್ನ ವಿನಯ್ ಮೊಬೈಲ್ ನಲ್ಲಿ ತನ್ನ ಆತ್ಮಹತ್ಯೆಗೆ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ,ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರ ಮತ್ತು ಇತರರ ಒತ್ತಡ ಕಾರಣ ಎಂದು ವಾಕ್ಯ ಸಂದೇಶ ರಚನೆಯಾಗಿ ಫಾರ್ವರ್ಡ್ ಆದ ಹಿನ್ನಲೆ ರಾಜ್ಯ ಬಿಜೆಪಿ ಮುಖಂಡರು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು.ನಂತರ ಹೆಣ್ಣೂರು ಠಾಣೆಯಲ್ಲಿ ತೆನ್ನಿರ ಮೈನಾ ಮತ್ತು ಇತರರ ವಿರುದ್ಧ ಮೃತ ವಿನಯ್ ಸಹೋದರ ಜೀವನ್ ರವರು ದೂರು ದಾಖಲಿಸಿ ಎಫ್ ಐ ಆರ್ ಆಗಿತ್ತು. ವಿನಯ್ ಸೋಮಯ್ಯ ನವರು ತಮ್ಮ ಪತ್ನಿಗೆ ಬರೆದಿರುವ ಪತ್ರವೊಂದು ವೈರಲ್ ಆಗಿ ಪ್ರಕರಣಕ್ಕೆ ತಿರುವ ನೀಡಿತ್ತು.ಪತ್ನಿಗೆ ಬರೆದ ಪತ್ರದಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ತಾನು ಕಂಡ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಗಲಿಲ್ಲ.ಅದಕ್ಕಾಗಿ ಕ್ಷಮಿಸು ಎಂದು ಬರೆದಿದ್ದರು.ನಂತರ ಪೋಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ತೆನ್ನಿರ ಮೈನಾ ರವರ ವಿಚಾರಣೆ ನಡೆಸಿದ್ದಾರೆ.ವಿನಯ್ ಸೋಮಯ್ಯ ತಮಗೆ ಅಪರಿಚಿತ ವ್ಯಕ್ತಿಯಾಗಿದ್ದು ಅವರೊಂದಿಗೆ ಯಾವುದೇ ಪ್ರತ್ಯಕ್ಷ ಹಾಗೂ ಪರೋಕ್ಷ ಮಾತುಕತೆ ಹಾಗೂ ಸಂಭಂದಗಳನ್ನು ತಾವು ಹೊಂದಿಲ್ಲ ಎಂದು ತೆನ್ನಿರ ಮೈನಾ ಸ್ಪಷ್ಟಪಡಿಸಿದ್ದರು.

ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರು ಕೂಡ ವಿನಯ್ ಸೋಮಯ್ಯ ತಮಗೆ ಅಪರಿಚಿತ ವ್ಯಕ್ತಿ ಎಂದು ತಿಳಿಸಿದ್ದರು.ಚಾರ್ಜ್ ಸೀಟ್ ಸಲ್ಲಿಕೆಯ ನಂತರ ಪ್ರಕರಣದ ಸಂಪೂರ್ಣ ವಿವರ ತಿಳಿಯಲಿದೆ.ಕೊಡಗು ಬಿಜೆಪಿ ಮತ್ತು ಮಾಜಿ ಶಾಸಕರುಗಳು ತೆನ್ನಿರ ಮೈನಾ ಬಂಧನ ಮಾಡಬೇಕು ಎಂದು ಹಲವು ಆಯಾಮದಲ್ಲಿ ಹೋರಾಟ ಮಾಡಿದ್ದರು.