ವಿರಾಜಪೇಟೆ: ಅನಾರೋಗ್ಯ ಅವಿವಾಹಿತ ವ್ಯಕ್ತಿ ನೇಣಿಗೆ ಶರಣು

ವಿರಾಜಪೇಟೆ: ಕೆಲವು ತಿಂಗಳ ಹಿಂದಿನಿಂದ ಅನಾರೋಗ್ಯದಿಂದ ಬಳಲುತಿದ್ದ ಗೂಡ್ಸ್ ಆಟೋ ಚಾಲಕ ನೇಣಿಗೆ ಶರಣದಾ ಘಟನೆ ವಿರಾಜಪೇಟೆ ಐಮಂಗಲ ಗ್ರಾಮದಲ್ಲಿ ನಡೆದಿದೆ.ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಂಮಗಲ ಗ್ರಾಮದ ನಿವಾಸಿ ದಿ. ಬೊಳ್ಳಚಂಡ ಭೀಮಯ್ಯ ಅವರ ಪುತ್ರ ಗೂಡ್ಸ್ ಆಟೋ ಚಾಲಕ ಬಿ.ಬಿ. ಮಹೇಶ್ ದೇವಯ್ಯ ( 51) ನೇಣಿಗೆ ಶರಣಾದ ವ್ಯಕ್ತಿ.
ಮೃತ ವ್ಯಕ್ತಿ ವಿರಾಜಪೇಟೆ ನಗರದ ಜೈನರ ಬೀದಿಯ ಗೂಡ್ಸ್ ವಾಹನದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದನು. ಮೃತನು ಅವಿವಾಹಿತನಾಗಿದ್ದು, ಕೆಲವು ತಿಂಗಳುಗಳಿಂದ ಬೆನ್ನು ಹಾಗೂ ಕತ್ತಿನ ನರದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ಸುಮಾರು 7 ಗಂಟೆಯ ವೇಳೆಗೆ ಮನೆಯ ಸನೀಹದ ತೋಟದ ಸೀಬೆ ಮರಕ್ಕೆ ಲುಂಗಿ (ಪಂಚೆ)ಯಿಂದ ಕುತ್ತಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತನ ತಂಗಿ ರೀಟಾ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
What's Your Reaction?






