ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ: ಸೆಪ್ಟೆಂಬರ್ ತಿಂಗಳಲ್ಲಿ ಗುರುವಂದನಾ ಕಾರ್ಯಕ್ರಮಕ್ಕೆ ನಿರ್ಧಾರ.
ಸಿದ್ದಾಪುರ:- ವಿದ್ಯಾರ್ಥಿ ಜೀವನದ ಸವಿ ನೆನಪಿನೊಂದಿಗೆ ಕಳೆದ 25ವರ್ಷಗಳನ್ನು ಕಳೆದ ಹಳೆ ವಿದ್ಯಾರ್ಥಿಗಳ ತಂಡವು ಸ್ನೇಹ ಸಮ್ಮಿಲನ ಎಂಬ ವಿಭಿನ್ನ ಕಾರ್ಯಕ್ರಮದ ಮೂಲಕ ಒಂದು ಗೂಡಿ ತಾವು ವಿದ್ಯಾರ್ಜನೆ ಮಾಡಿದ ಶಾಲಾ ದೇಗುಲಕ್ಕೆ ನೆನಪಿನ ಕಾಣಿಕೆ ಹಾಗೂ ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬೆಳ್ಳಿ ಮಹೋತ್ಸವ ವನ್ನು ಅವಿಸ್ಮರಣೀಯ ವಾಗಿಸುವಂತೆ ತೀರ್ಮಾನಿಸಿದರು.ಪೊನ್ನಂಪೇಟೆ ಸರಕಾರಿ ಪ್ರೌಢ ಶಾಲೆಯಲ್ಲಿ 1999ರ ಸಾಲಿನಲಿ ವ್ಯಾಸಂಗ ಮಾಡಿದ ಅಂದಿನ ವಿದ್ಯಾರ್ಥಿಗಳು 25ವರ್ಷಗಳ ನಂತರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯಾಗಿಯಾದರು. ಆಂಟಿ ,ಅಂಕಲ್ ಎಂದು ಪರಸ್ಪರ ಕಾಲೆಳೆಯುವ ಮೂಲಕ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಿದರು. ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೀವನದ ಬೆಳ್ಳಿ ಮಹೋತ್ಸವ ಆಚರಣೆ ಮಾಡುವ ಹಾಗೂ ಜ್ಞಾನ ದೇಗುಲಕ್ಕೆ ನೆನಪಿನ ಕಾಣಿಕೆ ಯೊಂದಿಗೆ ಗುರು ವಂದನಾ ಕಾರ್ಯಕ್ರಮ ನಡೆಸುವ ಬಗೆ ತೀರ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿ ಚಿತ್ರ ನಟ ಅಜಿತ್ ಶಿಸ್ತು ,ಸಮ್ಯಮದೊಂದಿಗೆ ಪ್ರತಿಯೊಬ್ಬ ವ್ಯಕ್ತಿಯನ್ನು ಸಮಾಜದ ಆಸ್ತಿಯನ್ನಾಗಿಸುವಲ್ಲಿ ಗುರುಗಳ ಪಾತ್ರ ಬಹುಮುಖ್ಯವಾಗಿದ್ದು ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಅಂತೆಯೆ ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನ ದೀವಿಗೆ ಹಚ್ಚುವ ಸ್ಥಳ ಶಾಲೆಯಾಗಿದ್ದು ಓದಿದ ಶಾಲೆಗೆ ನೆನಪಿ ಕಾಣಿಕೆ ನೀಡಿ ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಸೆಪ್ಟೆಂಬರ್ ತಿಂಗಳಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪೊನ್ನಂಪೇಟೆ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿನಿ ಪ್ರಜಿತ ಮಾತನಾಡಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ 25ವರ್ಷಗಳು ಸಂದಿದ್ದು ಹಳೆ ವಿದ್ಯಾರ್ಥಿ ಗೆಳೆಯರನ್ನು ಸೇರಿಸಿ ಅರ್ಥಪೂರ್ಣ ವಿದ್ಯಾಬೆಳ್ಳಿ ಮಹೋತ್ಸವ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ 25ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
What's Your Reaction?






