ಗುರಿ ಸಾಧಿಸುವ ಛಲವಿದ್ದಲ್ಲಿ ಏನನ್ನೂ ಸಾಧಿಸಲು ಸಾಧ್ಯ: ಆರ್.ಐಶ್ವಯ೯

ಗುರಿ ಸಾಧಿಸುವ ಛಲವಿದ್ದಲ್ಲಿ ಏನನ್ನೂ ಸಾಧಿಸಲು ಸಾಧ್ಯ: ಆರ್.ಐಶ್ವಯ೯

ಮಡಿಕೇರಿ: ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ,ಸಾದಿಸುವ ಛಲ ಇದ್ದಲ್ಲಿ ಜೀವನದಲ್ಲಿ ಏನನ್ನು ಬೇಕಾದರೂ ಸಾದಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವಯ೯ ಹೇಳಿದ್ದಾರೆ. ಮಾದಾಪುರದ ಶ್ರೀಮತಿ ಡಿ. ಚೆನ್ಮಮ್ಮ ಪದವಿ ಪೂವ೯ ಕಾಲೇಜಿನಲ್ಲಿ ವಿದ್ಯಾಥಿ೯ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಎಂತಹುದ್ದೇ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಎದೆಗುಂದದೆ ಸೋಲು ಗೆಲವುಗಳನ್ನು ಸ್ಥಿತಪ್ರಜ್ಞ ರಾಗಿ ಸ್ವೀಕರಿಸುವಂತೆ ವಿದ್ಯಾರ್ಥಿಗಳಿಗೆ ಅವುರು ಕರೆನೀಡಿದರು. ಗರಗಂದೂರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ ಮಾತನಾಡಿ ,ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಉತ್ತಮ ನಾಯಕತ್ವ ಗುಣ ಗಳನ್ನು ಮೈಗೂಡಿಸಿಕೊಳ್ಳುವoತೆ ಕಿವಿಮಾತು ಹೇಳಿದರು.

ಶ್ರೀಮತಿ ಡಿ. ಚೆನ್ನಮ್ಮ ವಿದ್ಯಾಸಂಸ್ಥೆಯ ಅಧ್ಯಕ್ಷ ಕರ್ನಲ್ ಬಿ ಜಿ ವಿ ಕುಮಾರ್, ಕಾರ್ಯದರ್ಶಿ ಮಧು ಬೋಪಣ್ಣ, ಪ್ರಾಂಶುಪಾಲ ಮಂದಪ್ಪ, ಆಡಳಿತ ಮಂಡಳಿ ಸದಸ್ಯರಾದ ಟಿ ಪಿ ಸಂದೇಶ್ ಮುಖ್ಯ ಶಿಕ್ಷಕಿ ರೀಟಾ ವೇದಿಕೆಯಲ್ಲಿದ್ದರು. ದೈಹಿಕ ಶಿಕ್ಷಕ ಪಾಲಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕಿ ಪವಿತಾ ವಂದಿಸಿದರು ಕಾಯ೯ಕ್ರಮವನ್ನು ಉಪನ್ಯಾಸಕಿ ಪ್ರಮೀಳಾ ನೀರೂಪಿಸಿದರು. ಉಪನ್ಯಾಸಕ ಮೋಹನ್ ಹೆಗ್ಡೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಪರಿಚಯಿಸಿದರು..