ಉಸಿರಾಟಕ್ಕೆ ನೆರವಾಗುವ ಆಕ್ಸಿಜೆನ್ ಕಾನ್ಸನ್ಂಟ್ರೇಟ್ ವಿತರಿಸಿದ ಶಾಸಕ ಪೊನ್ನಣ್ಣ

ಉಸಿರಾಟಕ್ಕೆ ನೆರವಾಗುವ ಆಕ್ಸಿಜೆನ್  ಕಾನ್ಸನ್ಂಟ್ರೇಟ್  ವಿತರಿಸಿದ ಶಾಸಕ ಪೊನ್ನಣ್ಣ

ಮಡಿಕೇರಿ;ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ, ಮಡಿಕೇರಿ ತಾಲೂಕು ಕುಂದಛೇರಿ ಗ್ರಾಮದ ದಿವ್ಯಾಂಗ, ಚರಣ್ ಕೇಕಡ ರವರಿಗೆ, ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಖರೀದಿಸಿದ ಆಕ್ಸಿಜನ್ ಕಾನ್ಸಂಟ್ರೇಟರನ್ನು ನೀಡಲಾಯಿತು.

 ಈ ಸಂದರ್ಭದಲ್ಲಿ ಪ್ರಮುಖರಾದ ಸೂರಜ್ ಹೊಸೂರು, ಕೆ ಡಿ ಪಿ ಸದಸ್ಯ ಬಾಚಮಾಂಡ ಲವ ಚಿಣ್ಣಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಹನೀಫ್, ತಾಲೂಕು ಅಲ್ಪಸಂಖ್ಯಾತ ಅಧ್ಯಕ್ಷ ರಫೀಕ್, ಕಕ್ಕಬೆ ಮಾಜಿ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಪ್ರಮುಖರು ಆಪ್ರು ರವೀಂದ್ರ, ಬಾಲಚಂದ್ರ ನಾಯರ್, ಕೋಡಿರ ವಿನೋದ್, ಹ್ಯಾರೀಶ್, ಹನೀಫ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.