ಚೆಂಬು ವ್ಯಾಪ್ತಿಯಲ್ಲಿ ಪುಂಡಾನೆ ಸೆರೆಗೆ ಅನುಮತಿ
admincoorgdaily
ಮಡಿಕೇರಿ:ತಾಲ್ಲೂಕಿನ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕಾಡಾನೆ ದಾಳಿಯಿಂದ ರೈತನೊಬ್ಬ ಮೃತಪಟ್ಟ ಹಿನ್ನೆಲೆ ದಾಳಿಕೋರ ಆನೆ ಪತ್ತೆ ಕಾರ್ಯಚರಣೆಯನ್ನು ಅರಣ್ಯ ಇಲಾಖೆಯವರು ತೀವ್ರಗೊಳಿಸಿದ್ದು, ಆನೆ ಸೆರೆ ಹಿಡಿಯಲು ಬೇಕಾದ ಅನುಮತಿಯನ್ನು ಭಾನುವಾರ ರಾಜ್ಯ ಸರ್ಕಾರವೇ ಮೌಖಿಕವಾಗಿ ನೀಡಿದ್ದು, ಇಂದು ಸರಕಾರದಿಂದ ಅಧಿಕೃತ ಅನುಮತಿ ಪತ್ರ ಸಿಗಲಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಮಾಹಿತಿ ನೀಡಿದ್ದಾರೆ.