ಆಗಸ್ಟ್ 11 ಸೋಮವಾರ ಕರೆಂಟ್ ಇರಲ್ಲ!

ಆಗಸ್ಟ್ 11 ಸೋಮವಾರ ಕರೆಂಟ್ ಇರಲ್ಲ!

ಕುಶಾಲನಗರ:66/11ಕೆ.ವಿ ಕುಶಾಲನಗರ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಸುಂಟಿಕೊಪ್ಪ, ಪನ್ಯ, ಹೊಸಕೋಟೆ, ನಾಕೂರು, ಗದ್ದೆಹಳ್ಳ ಫೀಡರ್‌ಗಳಲ್ಲಿ ದಿನಾಂಕ 11.08.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00ಗಂಟೆಯವರೆಗೆ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಲಿದೆ. ಆದ್ದರಿಂದ ಸುಂಟಿಕೊಪ್ಪ ಟೌನ್, ಪನ್ಯ ಹರದೂರು, ಉಲುಗುಲಿ, ನಾರ್ಗಾಣೆ, ಬೆಟ್ಟಗೇರಿ, ನಾಕೂರು, ಹೆರೂರು, ಅಂದಗೋವೆ, ಕೊಡಗರಹಳ್ಳಿ, ಹೊಸಕೋಟೆ, ಕಂಬಿಬಾಣೆ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ (ಎ) ಕಾರ್ಯ ಮತ್ತು ಪಾಲನೆ ವಿಭಾಗ, ಚಾವಿಸನಿನಿ, ಮಡಿಕೇರಿ ಅವರು ಕೋರಿದ್ದಾರೆ.